N
ದಯವಿಟ್ಟು ತಾಯಿಯ ಸುಂದರವಾದ ನಾರುಮಡಿಯಾಗೋಣ
ವಿವಾಹ ಔತಣದಲ್ಲಿ ಯಜ್ಞದಕುರಿಯಾದಾತನ ಮದಲಗಿತ್ತಿಯ ನಾರುಮಡಿಯು ದೇವಜನರ ಸತ್ಕಾರ್ಯಗಳನ್ನು ಸೂಚಿಸುತ್ತದೆ
ಮನುಕುಲವು ದೀಕ್ಷಾಸ್ನಾನದ ಮೂಲಕ ಎಲ್ಲಾ ಹಿಂದಿನ ಪಾಪಗಳನ್ನು ಮತ್ತು ಪಾಪಧೀನ ಸ್ವಭಾವವನ್ನು ತೊಳೆದು, ನೀತಿವಂತ ಕಾರ್ಯಗಳ ಮೂಲಕ ಹೊಸದಾಗಿ ಹುಟ್ಟಿದಾಗ, ಅವರು ಮದಲಗಿತ್ತಿಯಾದ ಪರಲೋಕ ತಾಯಿಯ ಸುಂದರವಾದ ನಾರುಮಡಿಯಾಗುತ್ತಾರೆ ಮತ್ತು ಪರಲೋಕರಾಜ್ಯದಲ್ಲಿ ರಾಜವಂಶಸ್ಥದ ಯಾಜಕರಾಗಿ ನಿತ್ಯ ಮಹಿಮೆಯನ್ನು ಅನುಭವಿಸುತ್ತಾರೆ ಎಂದು ಸತ್ಯವೇದವು ಪ್ರವಾದಿಸುತ್ತದೆ.
ಪರಲೋಕರಾಜ್ಯದಲ್ಲಿ ದೇವರ ಬಾಧ್ಯತೆಯನ್ನು ಪಡೆಯಲು ರಾಜಕುಮಾರರು ಮತ್ತು ರಾಜಕುಮಾರಿಯರಿಗೆ ಯಾವ ಸದ್ಗುಣಗಳು ಅವಶ್ಯಕ?
ಪರಲೋಕದಲ್ಲಿ ರಾಜವಂಶಸ್ಥದ ಯಾಜಕರಾಗಲು, ಒಬ್ಬ ವ್ಯಕ್ತಿ ಸತ್ಯವೇದದ ಮೂಲಕ ದೇವರ ಬೋಧನೆಗಳನ್ನು ಪಡೆಯಬೇಕು. ಚರ್ಚ್ ಆಫ್ ಗಾಡ್ ಸದಸ್ಯರು ಸಬ್ಬತ್ ಮತ್ತು ಪಸ್ಕವನ್ನು ಆಚರಿಸುವುದಲ್ಲದೆ, “ಒಬ್ಬರಿಗೊಬ್ಬರು ಐಕ್ಯರಾಗಿರಿ, ಒಬ್ಬರನ್ನೊಬ್ಬರು ಪ್ರೀತಿಸಿ ಮತ್ತು ನೂತನಸ್ವಭಾವವನ್ನು ಧರಿಸಿಕೊಳ್ಳಿ” ಎಂದು ಹೇಳಿದ ಕ್ರಿಸ್ತ ಅನ್ ಸಂಗ್ ಹೊಂಗ್ ರವರ ಬೋಧನೆಗಳನ್ನು ತಮ್ಮ ಹೃದಯಗಳಲ್ಲಿ ಕೆತ್ತಿಕೊಳ್ಳುತ್ತಾರೆ ಮತ್ತು ಅವುಗಳನ್ನು ಅಭ್ಯಾಸಕ್ಕೆ ಹಾಕುತ್ತಾರೆ, ಒಳ್ಳೆಯ ಕಾರ್ಯಗಳ ಮೂಲಕ ಇಡೀ ಲೋಕಕ್ಕೆ ದೇವರ ಮಹಿಮೆಯನ್ನು ಪ್ರಕಟಪಡಿಸುತ್ತಾರೆ.
ಯಜ್ಞದ ಕುರಿಯಾದಾತನ ವಿವಾಹ ಕಾಲವು ಬಂತು; ಆತನಿಗೆ ವಿವಾಹವಾಗುವ ಕನ್ಯೆ ತನ್ನನ್ನು ಸಿದ್ಧಮಾಡಿಕೊಂಡಿದ್ದಾಳೆ; ಸಂತೋಷಪಡೋಣ, ಹರ್ಷಗೊಳ್ಳೋಣ, ಆತನನ್ನು ಘನಪಡಿಸೋಣ ಎಂದು ಹೇಳಿತು.
ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವದಕ್ಕೆ ಆಕೆಗೆ ಅನುಗ್ರಹಿಸೋಣವಾಗಿತ್ತು. ಆ ನಾರುಮಡಿ ಅಂದರೆ ದೇವಜನರ ಸತ್ಕಾರ್ಯಗಳೇ.
ಪ್ರಕಟನೆ 19:7-8
ನಿಮ್ಮ ನೀತಿಯು ಶಾಸ್ತ್ರಿಗಳ ಮತ್ತು ಫರಿಸಾಯರ ನೀತಿಗಿಂತಲೂ ಹೆಚ್ಚಿನದಾಗದಿದ್ದರೆ ನೀವು ಪರಲೋಕರಾಜ್ಯದಲ್ಲಿ ಸೇರಲಾರಿರಿ ಎಂದು ನಿಮಗೆ ಹೇಳುತ್ತೇನೆ.
ಮತ್ತಾಯನು 5:20
ವೀಕ್ಷಣೆಗಳು13
#ನೀತಿವಂತ ನಡವಳಿಕೆ
#ಪ್ರೀತಿ