ಪಾರಸಿಯ ಅರಸನಾದ ಕೋರೆಷನು ಸತ್ಯವೇದದಲ್ಲಿ ತನ್ನ ಕುರಿತ ಪ್ರವಾದನೆಯನ್ನು ಕಂಡುಹಿಡಿದು, ಅದರಿಂದ ಪ್ರೇರಿತನಾಗಿ ಇಸ್ರಾಯೇಲ್ಯರನ್ನು ಸೆರೆಯಿಂದ ಬಿಡಿಸಿ ಯೆರೂಸಲೇಮಿನಲ್ಲಿ ಆಲಯವನ್ನು ಕಟ್ಟಿಸಿದಂತೆಯೇ, ಇಂದು ನಾವು ಸಹ ಸತ್ಯವೇದದಲ್ಲಿ ದಾಖಲಾಗಿರುವ ಪ್ರವಾದನೆಗಳನ್ನು ನಂಬಿ, ಕೋರೆಷನಂತೆಯೇ ಅದೇ ಆಳವಾದ ಸಂತೋಷದಿಂದ ತುಂಬಿದವರಾಗಿ, ದೇವರು ನಮಗೆ ಆಜ್ಞಾಪಿಸಿರುವ ಸುವಾರ್ತೆಯನ್ನು ನಮ್ಮ ಪೂರ್ಣ ಹೃದಯದಿಂದಲೂ ಪೂರ್ಣ ಮನಸ್ಸಿನಿಂದಲೂ ಬೋಧಿಸಬೇಕು.
ಯೇಸು ಹತ್ತು ಮೊಹರಿಗಳ ದೃಷ್ಟಾಂತದ ಮೂಲಕ ಬೋಧಿಸಿದಂತೆ, ದೇವರ ವಾಕ್ಯಕ್ಕೆ ಭಯಪಡುವವರು, ಮರಣ, ದುಃಖ, ಗೋಳಾಟ ಅಥವಾ ನೋವಿಲ್ಲದ ಪರಲೋಕರಾಜ್ಯದಲ್ಲಿ ದೇವರೊಂದಿಗೆ ಯುಗಯುಗಾಂತರಗಳವರೆಗೂ ಆಳುತ್ತಾ ನಿತ್ಯ ಮಹಿಮೆಯನ್ನು ಅನುಭವಿಸುವರು ಎಂದು ದೇವರು ಮಹಿಮಾನ್ವಿತ ಭವಿಷ್ಯವನ್ನು ವಾಗ್ದಾನ ಮಾಡಿದ್ದಾರೆ.
ತರುವಾಯ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಕಂಡೆನು. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಇಲ್ಲದೆ ಹೋದವು; ಇನ್ನು ಸಮುದ್ರವೂ ಇಲ್ಲ. . . .ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು ಎಂದು ಹೇಳಿತು. ಪ್ರಕಟನೆ 21:1–4
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ